Sunday, March 28, 2010

ಹೀಗೊಂದು ಸಂಗೀತ ಸಂಜೆ !

ಹಿಂದೊಮ್ಮೆ ಮನೆ ಸಾಮಾನುಗಳು ನೆಡೆಸಿದ್ದ ಸಂಗೀತ ಸಂಜೆ ಬಗ್ಗೆ ಕೇಳಿದ್ದಿರಿ ... ತಪ್ಪಿ ಹೋಗಿದ್ದಲ್ಲಿ ಅದರ ಕೊಂಡಿ ಇಲ್ಲಿದೆ ....
http://sampada.net/a...


ಇರಲಿ, ಈಗ ಮನುಜನ ರೋಗಗಳು / ಸಂಕಷ್ಟಗಳು ಹಾಡೋ ಹಾಡುಗಳನ್ನು ಕೇಳಿ ... ಕೆಲವನ್ನು ಮಾತ್ರ ಹೆಸರಿಸಿ ಹಾಡಿನ ಒಂದು ಸಾಲನ್ನು ಮಾತ್ರ ಹಾಕಿದ್ದೇನೆ ...

ಸಂದರ್ಭ ಹೀಗಿದೆ:

ಮನುಜನ ಖಾಯಿಲೆಗಳು / ಸಂಕಷ್ಟಗಳು ಒಮ್ಮೆ ಯಮಧರ್ಮನಲ್ಲಿ ಮೊರೆಯಿಟ್ಟವು. "ಪ್ರಭೂ, ನಮಗೆ ಮನುಜನನ್ನು ಕಾಡಿಸಿ ಪೀಡಿಸಿ ಬೇಸರವಾಗಿದೆ. ನಮಗೊಂದು ದಿನ ರಜೆ ನೀಡು" ಎಂದು. ಯಮಧರ್ಮ ಈ ಪ್ರಶ್ನೆಗೆ ಹೌಹಾರಿ ಬಿದ್ದು "ಎಲ್ಲಾದರೂ ಉಂಟೆ? ... ಸಾಧ್ಯವೇ ಇಲ್ಲ ... ನೀವುಗಳು ದೈವಸೃಷ್ಟಿ. ಮನುಜನು ಮಾಡಿರುವ ಪಾಪಗಳಿಗೆ ಶಿಕ್ಷೆಯ ರೂಪವೇ ನೀವುಗಳು. ಮನುಜ ಎಷ್ಟೇ ಪ್ರಗತಿ ಸಾಧಿಸಿದರೂ ದೈವತ್ವವನ್ನು ಮೀರದೆ ಇರುವುದರ ಮೂಲ ಕಾರಣ ನೀವು. ನಿಮಗೇ ರಜೆ ನೀಡುವುದು ದುಸ್ಸಾಧ್ಯ. ಆದರೆ ಕೆಲವು ಘಂಟೆಗಳು ಮಾತ್ರ ಮನರಂಜನಾ ಕಾರ್ಯಕ್ರಮ ನೆಡೆಸಲು ಅನುಮತಿ ನೀಡುತ್ತೇನೆ" ಎಂದ.
ಅದೇ ಈ "ಖಾಯಿಲೆಗಳ ಸಂಗೀತ ಸಂಜೆ" ... ಯಾವ ರೋಗ / ಸಂಕಷ್ಟಗಳು ಯಾವ ಹಾಡನ್ನು ಹೇಳಿತು ಕೇಳೋಣವೇ?

-----

Alzheimer: ನಿನ್ನ ನೀನು ಮರೆತರೇನು ಸುಖವಿದೆ, ತನ್ನ ತನವ ತೊರದರೇನು ಸೊಗಸಿದೇ? (ದೇವರ ಕಣ್ಣು)

H1N1 (ಹಂದಿ ಜ್ವರ) : ದೂರ ದೂರ ಅಲ್ಲೆ ನಿಲ್ಲಿ ನನ್ನ ದೇವರೇ (ಪ್ರೊಫೆಸರ್ ಹುಚ್ಚೂರಾಯ)

ಗಂಟಳು ಕಟ್ಟಿದಾಗ: ಮಾತೊಂದ ಹೇಳುವೆ ಹತ್ತಿರ ಹತ್ತಿರ ಬಾ (ಕಿಟ್ಟು ಪುಟ್ಟು)

Diabetes (ಸಕ್ಕರೆ ಖಾಯಿಲೆ): ಹಸಿವೇ ದೂರಾ ನೀನಿರು .... ಹಸಿವೆ ದೂರ ನೀನಿರೂ (ಪ್ರೀತಿಸಿ ನೋಡು)

Jaundice (ಕಾಮಾಲೆ): ಬಣ್ಣಾ ನನ್ನ ಒಲವಿನ ಬಣ್ಣ ... ನನ್ನ ಬದುಕಿನ ಬಣ್ಣ (ಬಂಧನ)

ನೆಗಡಿ: ಹರಿಯೋ ನದಿಯು ಒಂದೇ ಕಡೆ ನಿಲ್ಲೋಕ್ಕಾಗಲ್ಲಾ... ಹುಟ್ಟಿದ ಮನುಷ್ಯ ಒಂದೇ ಊರಲಿ ಬಾಳೋಕ್ಕಾಗಲ್ಲ (ಜಿಮ್ಮಿ ಗಲ್ಲು)

Piles (ಪೈಲ್ಸ್): ಕುಂತ್ರೆ ನಿಂತ್ರೆ ಅವನ್ದೇ ಧ್ಯಾನ ಜೀವಕ್ಕಿಲ್ಲ ಸಮಾಧಾನ ಅವನಿಗೆ ಎಂಥಾ ಬಿಗುಮಾನ (ತ್ರಿಶೂಲ)

ಉಳುಕು: ಬಳ್ಳಿಯೊಂದು ಬಳುಕುತಿದೇ, ಆಹಾ ಆಹಾ ನಲಿಯುತಿದೆ (ಮಿ.ರಾಜಕುಮಾರ್)

ಛಳಿ-ಜ್ವರ: ಛಳಿ ಛಳಿ ತಾಳೆನು ಈ ಛಳಿಯಾ, ಗೆಳೆಯನೆ ಬಾರೆಯಾ ನೀ ಸನಿಹಾ (ಚಕ್ರವ್ಯೂಹ)

ದದ್ದೆ: ಕೆಂಪಾದವೋ ಎಲ್ಲ ಕೆಂಪಾದವೋ ... ನೆತ್ತಾರಾ ಕುಡಿದಾಂಗೆ ಕೆಂಪಾದವೋ (ಎಲ್ಲೆಂದಲೋ ಬಂದವರು)

Smallpox (ಅಮ್ಮ): ಯಾರಿಟ್ಟರೀ ಚುಕ್ಕಿ ... ಯಾಕಿಟ್ಟರೀ ಚುಕ್ಕೀ (ಪ್ರೀತ್ಸೆ)

ಏಡ್ಸ್: ಉಪ್ಪ ತಿಂದಾ ಮ್ಯಾಲೆ, ನೀರ ಕುಡಿಯಲೇಬೇಕು, ತಪ್ಪಾ ಮಾಡಿದ ಮ್ಯಾಲೇ, ಶಿಕ್ಷೆ ಅನುಭವಿಸಲೇ ಬೇಕು (ಕಾಲೇಜು ರಂಗ)

ಮಲಬದ್ದತೆ: ಬಾ ಬಾರೋ ಬಾರೋ ರಣಧೀರ ... ನೀ ಬಂದರೆ ದಿಗ್ವಿಜಯದ ಹಾರ (ರಣಧೀರ)

Morning Sickness ವಾಂತಿ: ಬಂದೆಯ ಬಾಳಿನ ಬೆಳಕಾಗಿ, ಬಂದೆಯ ಪ್ರೇಮದ ಸಿರಿಯಾಗಿ, ನನಗಾಗಿ ನನ್ನ ಜೊತೆಯಾಗಿ (ಅವಳ ಹೆಜ್ಜೆ)

ಮೈಕೈ ನೋವು: ಯವ್ವೋ! ಯಾಕೋ ಮೈಗೆ ಉಸಾರಿಲ್ಲ ಡಿಶುಂ !! (ರಸಿಕ)

ಮುಜುಗರ: ಹೇಳಲಾರೆನು ತಾಳಲಾರೆನು ಎನ್ನ ಮನಸಿನ ಭಾವನೆ (ಬೆಂಕಿ ಬಿರುಗಾಳಿ)

Night Blindness (ಇರುಳುಗಣ್ಣು) : ರವಿ ನೀನು ಆಗಸದಿಂದಾ ಮರೆಯಾಗಿ ಹೋಗದೆ ನಿಲ್ಲೂ, ಬಾಳಲ್ಲಿ ಕತ್ತಲೆ ತುಂಬಿ ನೀ ಹೋಗದೆ (ಹೊಸ ಬೆಳಕು)

ತಲೆನೋವು: ಈ ಬಂಧನಾ ಜನುಮ ಜನುಮದಾ ಅನುಬಂಧನಾ (ಬಂಧನ)

ತಲೆಸುತ್ತು: ಆಕಾಶ ಕೆಳಗೇಕೆ ಬಂತು .. ಊಹೂ ... ಈ ಭೂಮಿ ಮೇಲೇಕೆ ಹೋಯ್ತು ... ಇದು ತಾರೆಯೋ, ಇದು ಮೋಡವೋ (ಸಮಯದ ಗೊಂಬೆ)

ಚೆನ್ನೈ ಕಣ್ಣು : ಕಣ್ಣೂ ಕಣ್ಣೂ ಕಲೆತಾಗ, ಬದುಕು ಉಯ್ಯಾಲೆಯಾಗಿದೆ ತೂಗಿ, ಹೃದಯಾ ಬಿಡಲಾರೆ ಎಂದಿದೇ ಕೂಗಿ (ಕಾಮನಬಿಲ್ಲು)

ಬಿ.ಪಿ: ಹೃದಯ ಸಮುದ್ರ ಕಲಕಿ, ಉಕ್ಕಿದ ದ್ವೇಷದ ಬೆಂಕಿ, ರೋಷಾಗ್ನಿ ಜ್ವಾಲೆ ಉರಿದುರಿದೂ (ಅಶ್ವಮೇಧ)

ಶ್ವಾಸಕೋಶ ತೊಂದರೆ: ಉಸಿರೇ, ಉಸಿರೇ, ಈ ಉಸಿರು ನಿಂತ ಮೇಲೆ .... (ಹುಚ್ಚ)

ಮುಂದೆ ... ನಿಮ್ಮಿಂದ....



No comments:

Post a Comment